Monday, 10 March 2025

ಯಲ್ಲಮ್ಮನಗುಡ್ಡಕ್ಕೆ ಗಾಯರಾಣ ಜಾಗ ನೀಡಲು ವಿರೋಧ

 


ಉಗರಗೋಳ: ಉಗರಗೋಳ ಗ್ರಾಪಂನ 1,097 ಎಕರೆ ಗಾಯರಾಣ ಜಾಗವನ್ನು ಯಲ್ಲಮ್ಮನ ಗುಡ್ಡಕ್ಕೆ ನೀಡುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದ ಹನುಮಂತ ದೇವರ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಗರಗೋಳ, ಹರ್ಲಾಪುರ ಮತ್ತು ಯಲ್ಲಮ್ಮ ತಾಂಡೆಗಳ ಗ್ರಾಮಸ್ಥರ ಸಾರ್ವಜನಿಕ ಸಭೆಯಲ್ಲಿ ಗಾಯರಾಣ ವ್ಯಾಜ್ಯ ಸಂಧಾನದ ಬದಲಿಗೆ, ನ್ಯಾಯಾಲಯದಲ್ಲೇ ಇತ್ಯರ್ಥ್ಯವಾಗಲಿ ಎಂದು ನಿರ್ಧರಿಸಲಾಯಿತು.

ಗ್ರಾಮಸ್ಥ ಚಂದ್ರಶೇಖರ ಹಳ್ಳದ ಮಾತನಾಡಿ, ಯಲ್ಲಮ್ಮ ದೇವಸ್ಥಾನದ ಮೂಲವೇ ಉಗರಗೋಳ ಗ್ರಾಮ. ಇಲ್ಲಿ ಯಲ್ಲಮ್ಮ ದೇವಿಯ ಅರ್ಚಕರ ಮನೆತನಗಳಿವೆ. ಆದರೆ, ಈ ಮೂಲವಾಸಿಗಳನ್ನೇ ಹೊರಗಿಡುವ ಹುನ್ನಾರ ನಡೆದಿದೆ ಎಂದರು.
ಮಂಜುನಾಥಗೌಡ ರೇಗೌಡರ ಮಾತನಾಡಿ, ಸಾವಿರಾರು ಎಕರೆ ಭೂಮಿ ನೀಡಲು ಸಾಧ್ಯವಿಲ್ಲ. ಮೊದಲು 10 ಎಕರೆ ಪಡೆದು ಅಭಿವದ್ಧಿಪಡಿಸಿ. ನಿಮ್ಮ ಕಾರ್ಯದಿಂದ ತಪ್ತಿಯಾದಲ್ಲಿ, ನಾವೇ ಭೂಮಿ ಕೊಡಲು ಮುಂದೆ ಬರುತ್ತೇವೆ ಎಂದರು.
ಗ್ರಾಪಂ ಅಧ್ಯಕ್ಷ ಮಂಜುನಾಥ ಕಾಳಪ್ಪನವರ ಮಾತನಾಡಿ, ದೇವಸ್ಥಾನದ ಅಭಿವದ್ಧಿ ಕುರಿತು ಗ್ರಾಮಸ್ಥರಿಂದ ಮೊದಲು ಹಾಗೂ ಸದ್ಯ ಯಾವುದೂ ಅಡೆತಡೆ ಮಾಡಿಲ್ಲ. ಗುಡ್ಡದ ಅಧಿಕಾರಿಗಳಿಂದ ಗ್ರಾಮಕ್ಕೆ ಆಗುವ ಅನ್ಯಾಯದ ಕುರಿತು ಹೋರಾಟ ನಡೆಸಲಾಗಿದೆ ಎಂದರು.

ಗುರುನಾಥ ಗಾಂಜಿ ಮಾತನಾಡಿದರು. ನಿಂಗನಗೌಡ ಹರಳಕಟ್ಟೆ, ಶಂಕ್ರೆಮ್ಮ ಮುದ್ರಗಣಿ, ರಾಜೇಸಾಬ ಬಾರಿಗಿಡದ, ಮಡಿವಾಳಪ್ಪ ತಳವಾರ, ಯಲ್ಲಪ್ಪಗೌಡ ಗಂದಿಗೌಡರ, ಕಷ್ಣಪ್ಪ ಲಮಾಣಿ, ನೆಹರು ಬಡೆಪ್ಪನವರ, ಪ್ರಕಾಶ ಲಮಾಣಿ, ವಿಠಲ ಸಿದ್ಧಕ್ಕನವರ, ಯಲ್ಲಪ್ಪಗೌಡ ಪೋಲೇಶಿ, ಅಜ್ಜಪ್ಪಗೌಡ ಪೋಲೇಶಿ, ನೀಲಪ್ಪ ಸಿದ್ದಕ್ಕನವರ, ವೈ.ವೈ.ಕಾಳಪ್ಪನವರ, ರಾಮನಗೌಡ ತಿಪರಾಶಿ, ಬಸನಗೌಡ ಪಾಟೀಲ, ಅಪ್ಪು ಕಾಳಪ್ಪನವರ, ಶಿವನಗೌಡ ಗಂದಿಗೌಡರ, ಉಮೇಶ ದಿಡಗನ್ನವರ, ರಮೇಶ ಕರೀಕಟ್ಟಿ, ನಿಂಗಪ್ಪ ಬಡೆಪ್ಪನವರ, ಶರೀಫ್‌ಸಾಬ ಬಾರಿಗಿಡದ, ಸಂತೋಷ ಕಲಾಲ, ಗಣೇಶ ವಾಕೋಡಿ, ಕರೆಪ್ಪ ತಳವಾರ, ಮಹೇಶ ಚಪ್ಪರಮನಿ, ಶಂಕರಗೌಡ ರೇಷ್ಮೆಗೌಡರ, ಬುಡೇಸಾಬ ಬಾರಿಗಿಡದ, ಮಂಜುನಾಥ ಗುಡೆನ್ನವರ ಇದ್ದರು.

No comments:

Post a Comment